5 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಇಂಜಿನಿಯರಿಂಗ್ ಕಾಲೇಜು ವಸತಿ ನಿಲಯ

ಕುಶಾಲನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಕಳೆದ ಐದು  ವರ್ಷಗಳ ಹಿಂದೆ ನಿರ್ಮಿಸಿದ್ದ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ವಸತಿ ನಿಲಯ  ಕಟ್ಟಡ ಕಾಮಗಾರಿ ಅಪೂರ್ಣ ಗೊಂಡಿದೆ. ಕರ್ನಾಟಕ ಭೂ ಸೇನಾ ನಿಗಮದ ವತಿಯಿಂದ ರೂ.3 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಈ  ಕಟ್ಟಡ ಕಾಮಗಾರಿ ಅಪೂರ್ಣ ವಾಗಿದ್ದು ವಿದ್ಯಾರ್ಥಿಗಳ ಉಪಯೋಗಕ್ಕೆ ನಿಲುಕದಿರುವ ಬಗ್ಗೆ ವಿದ್ಯಾರ್ಥಿ ಸಮೂಹ  ಬೇಜವಾಬ್ದಾರಿ ಆಡಳಿತ ನೀತಿಯ  ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿಗೆ ವ್ಯಾಸಾಂಗಕ್ಕೆ  ದಾಖಲಾಗುವ ಗ್ರಾಮೀಣ ಪ್ರದೇಶಗಳ  ಬಹುತೇಕ  ವಿದ್ಯಾರ್ಥಿನಿಯರು ಹಾಸ್ಟೆಲ್ ಸೌಲಭ್ಯ  ಬಯಸಿಯೇ ಪ್ರವೇಶ ಪಡೆಯುತ್ತಾರೆ.

ಆದರೆ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಬಲ ಪಾರ್ಶ್ವದಲ್ಲಿ ಕಳೆದ ಆರು ವರ್ಷಗಳ ಹಿಂದೆ ನಿರ್ಮಿಸಿರುವ ಈ ಕಟ್ಟಡವನ್ನು ನೋಡಿಯೇ ಬಹುತೇಕ ವಿದ್ಯಾರ್ಥಿ ಗಳು ಕಳೆದ ಅಷ್ಟೂ ವರ್ಷಗಳಿಂದ ಇಂಜಿನಿಯರಿಂಗ್ ನ ವಿವಿಧ ಕೋರ್ಸುಗಳ  ವ್ಯಾಸಾಂಗಕ್ಕೆ ದಾಖಲಾಗಿ ಇದೀಗ ಪೂರ್ಣ ವಿದ್ಯಾಭ್ಯಾಸ ಮುಗಿಸಿ ಹೊರ ತೆರಳಿದರೂ ಕೂಡ ಕಟ್ಟಡ ಅದೇ ಸ್ಥಿತಿಯಲ್ಲಿರುವುದು ಮಾತ್ರ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ. 

ವಿದ್ಯುತ್ ಸಂಪರ್ಕ ಇಲ್ಲ 

ಕಳೆದ ಐದಾರು ವರ್ಷಗಳಿಂದಲೂ ಆಮೆಗತಿಯಲ್ಲಿ ಸಾಗಿ ಬಂದ ಈ ವಸತಿ ನಿಲಯದ ಕಟ್ಟಡಕ್ಕೆ ವಿದ್ಯುತ್ ಸಂಪರ್ಕ ಇದುವರೆಗೂ ಆಗಿಲ್ಲ. ಈ ಕಟ್ಟಡ ಕಾಮಗಾರಿಯನ್ನು ನಿರ್ವಹಿಸಿದ ಕರ್ನಾಟಕ ಭೂಸೇನಾ ನಿಗಮ ಸಂಪೂರ್ಣವಾಗಿ  ಕಾಮಗಾರಿ ಯನ್ನು ಪೂರ್ಣಗೊಳಿಸ ಬೇಕಿತ್ತಾದರೂ ಅನುದಾನದ ಕೊರತೆಯಿಂದಾಗಿ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಲ್ಲ ಎಂದು ಹೇಳಲಾಗುತ್ತಿದೆ.   

ಇದೀಗ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ  ಬಳಕೆ ಮಾಡಲು ಅತೀ ಮುಖ್ಯವಾಗಿ ವಿದ್ಯುತ್ ಸಂಪರ್ಕ ವಾಗಲೇಬೇಕಿದೆ. ಅಲ್ಲದೇ  ಇತರೇ ಕಾಮಗಾರಿ ಪೂರ್ಣ ಗೊಂಡು ಪಂಚ ವಾರ್ಷಿಕ ಯೋಜನೆ ಕಳೆದದ್ದರಿಂದ ಕಟ್ಟಡದ ಸುಸ್ಥಿತಿ ಅಥವಾ ದುಸ್ಥಿತಿ ಮುಂಬರುವ  ಮಳೆಗಾಲದ ದಿನಗಳಲ್ಲಿ ಗೊತ್ತಾಗಲಿದೆ. ಸಂಬಂಧಿಸಿದ ಇಲಾಖೆ ಇನ್ನಾದರೂ ಈ ಕಟ್ಟಡದ ಸಂಪೂರ್ಣವಾದ ಕಾಮಗಾರಿ ಪೂರೈಸಿ ಫಲಾನುಭವಿ ಗಳಾದ ವಿದ್ಯಾರ್ಥಿ ಗಳಿಗೆ ಮುಕ್ತಗೊಳಿ ಸುವುದೇ ಕಾದು ನೋಡಬೇಕಿದೆ.