ಕೋಟೆ ಅಬ್ಬಿಯಲ್ಲಿ ಸುರಕ್ಷತೆಯ ಕೊರತೆ : ಮಲಿನಗೊಳ್ಳುತ್ತಿರುವ ತಾಣ

ಮಕ್ಕಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೋಟೆ ಅಬ್ಬಿ ಜಲಪಾತ ಒಂದು ಸುಂದರವಾದ ಪ್ರಕೃತಿ ತಾಣ. ಈ ಪ್ರಕೃತಿಯ ತಾಣದಲ್ಲಿ ಸೊಬಗು ಸವಿಯಲು ನೂರಾರು ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ. ಮಡಿಕೇರಿಯಲ್ಲಿರುವ ಮಾಂದಲಪಟ್ಟಿ ಪ್ರವಾಸಿ ತಾಣದಿಂದ ಜೀಪಿನಲ್ಲಿ ಕೋಟೆ ಅಬ್ಬಿ ಜಲಪಾತಕ್ಕೆ ಪ್ರವಾಸಿಗರನ್ನು ಕರೆತರುವದು ವಾಡಿಕೆ. ಆದರೆ, ಈ ರಮಣೀಯ ತಾಣವು ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯಗಳಿಂದ ಮಲಿನವಾಗುತ್ತಿರುವುದಲ್ಲದೇ ಪ್ರವಾಸಿಗರಿಗೇ ಯಾವುದೇ ರಕ್ಷಣೆ ಇಲ್ಲದೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ಜಲಪಾತವು ಊರಿನವರಿಗೆ ಪವಿತ್ರ ಸ್ಥಳ. ಇದು ದೇವರ ಕೊಳವಾಗಿದೆ. ಅಲ್ಲಿ ಮೀನುಗಾರಿಕೆ, ಈಜುವದು ಹಾಗೂ ಇನ್ನಿತರ ಮೋಜುಮಸ್ತಿಯ ಚಟುವಟಿಕೆಗಳಿಗಾಗಿ ಮಾಡಿ-ಹೇಳಿದ ತಾಣವಲ್ಲ. ಈ ಜಲಪಾತ ಅಪಾಯಕಾರಿಯಾಗಿದ್ದು, ಆಳ, ನೀರಿನ ಸೆಳೆತದ ಬಗ್ಗೆ ಅರಿವಿಲ್ಲದೇ ಹಲವಾರು ಮಂದಿ ಇತ್ತೀಚೆಗಿನ ವರ್ಷಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಹಲವಾರು ದುಘರ್ಟನೆಗಳು ಸಂಭವಿಸಿದ್ದರೂ ಅಲ್ಲಿ ಸುರಕ್ಷಿತೆಯೇ ಇಲ್ಲ. 

 

2022ನಲ್ಲಿ ತೆಲಾಂಗಣ ರಾಜ್ಯದಿಂದ ಕೊಡಗಿಗೆ ಪ್ರವಾಸಕ್ಕೆ ಬಂದ ಮಕ್ಕಳೂ ಸೇರಿದಂತೆ ಮೂವರು ಜಲಪಾತಕ್ಕೆ ಇಳಿದು ಪ್ರಾಣಕಳೆದುಕೊಂಡರು. ಈ ದುರಂತ ಸಂಭವಿಸಿದ ನಂತರ ಜಲಪಾತದಲ್ಲಿ ಪಂಚಾಯಿತಿಯಿಂದ ಸ್ವಲ್ಪ ಕಾಲ ಪ್ರವಾಸಿಗರ ಭದ್ರತೆಗೆ ಒಬ್ಬರನ್ನು ನೇಮಿಸಲಾಗಿತ್ತು. ಆದರಿದೀಗ ಈ ಸಿಬ್ಬಂದಿ ಇಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಪ್ರವಾಸಿಗರು ಈಜುವುದನ್ನು ತಡೆಯಲು ಸ್ಥಳದಲ್ಲಿ ಎಚ್ಚರಿಕೆ ಫಲಕವನ್ನು ಹಾಕಲಾಗಿದ್ದರೂ,   ೪ಏಳನೇ ಪುಟಕ್ಕೆ  (ಮೊದಲ ಪುಟದಿಂದ) ಸಂಬಂಧಪಟ್ಟ ಅಧಿಕಾರಿಗಳು ಅದರ ನಿರ್ವಹಣೆ ಮಾಡುತ್ತಿಲ್ಲ. ಅದೇ ರೀತಿ, ಜಲಪಾತಕ್ಕೆ ಭೇಟಿ ನೀಡುವ ನೂರಾರು ಪ್ರವಾಸಿಗರು ಯಾವುದೇ ನಿರ್ಬಂಧಗಳಿಲ್ಲದೆ ಜಲಪಾತ ಪ್ರದೇಶಕ್ಕೆ ಇಳಿಯುತ್ತಿದ್ದಾರೆ. ಸ್ಥಳೀಯ ಅಂಗಡಿಯವರು ಪ್ರವಾಸಿಗರು ನೀರಿಗೆ ಇಳಿಯದಂತೆ ಎಚ್ಚರಿಕೆ ನೀಡುತ್ತಿದ್ದರೂ, ಪ್ರವಾಸಿಗರನ್ನು ಬಲವಂತವಾಗಿ ತಡೆಯಲು ಅವರಿಗೆ ಯಾವುದೇ ಅಧಿಕಾರವಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಅನೇಕ ಪ್ರವಾಸಿಗರು ಜಲಪಾತದ ಆಳವಾದ ಪ್ರದೇಶದಲ್ಲಿ ಸ್ನಾನ ಮಾಡುತ್ತಿದ್ದಾರಲ್ಲದೆ, ಕೆಲವು ಪ್ರವಾಸಿಗರು ಸೋಪ್ ಬಳಸಿ ಈ ಪವಿತ್ರ ಜಲಪಾತದಲ್ಲಿ ಸ್ನಾನಮಾಡುತ್ತಾ ಜಲಪಾತವನ್ನು ಕುಲುಷಿತಗೊಳಿಸುತ್ತಿದ್ದಾರೆ. ಮಕ್ಕಳು, ಹಿರಿಯರು ಹಾಗೂ ಯುವಕರು ಸೇರಿದಂತೆ ಅನೇಕ ಪ್ರವಾಸಿಗರು ಅಲ್ಲಿಗೆ ಈಜಲು ತೆರಳುತಿದ್ದು, ಇದು ಅನಾಹುತಕ್ಕೆ ಕರೆ ನೀಡುತ್ತಿದೆ. 

ಡೈಪರ್ ಪ್ಯಾಡ್ - ಪ್ಲಾಸ್ಟಿಕ್ ತ್ಯಾಜ್ಯ..!

ಸ್ವಚ್ಛ ಭಾರತ ಅನುಷ್ಠಾನವಾಗಲು ಸರಕಾರಕ್ಕಿಂತ ನಾಗರಿಕರ ಪಾತ್ರ ಅತಿ ಮುಖ್ಯ. ಎಲ್ಲೆಂದರಲ್ಲಿ ಕಸ ಎಸೆಯುವ ಕೆಲ ಅನಾಗರಿಕರಿಂದ ಸ್ವಚ್ಛ ಭಾರತವೂ ಅನುಷ್ಠಾನ ಅಸಾಧ್ಯ ಹಾಗೂ ಪ್ರಕೃತಿಗೂ ಹಾನಿ. ಪ್ರವಾಸಿಗರ ಅನಿಯಂತ್ರಿತ ಭೇಟಿಯಿಂದಾಗಿ ಕೋಟೆ ಅಬ್ಬಿ ಜಲಪಾತ ಪ್ರದೇಶದಾದ್ಯಂತ ಟನ್‌ಗಟ್ಟಲೆ ಕಸ ಬಿದ್ದಿದೆ. ಡೈಪರ್ ಪ್ಯಾಡ್‌ಗಳಿಂದ ಹಿಡಿದು ಟನ್‌ಗಟ್ಟಲೆ ಪ್ಲಾಸ್ಟಿಕ್ ತ್ಯಾಜ್ಯ, ಜಲಪಾತ ಪ್ರದೇಶದಾದ್ಯಂತ ಕಸ ಹರಡಿಕೊಂಡಿದೆ. ಈ ವಿಷಯಗಳು ಪಂಚಾಯತ್ ಅಧಿಕಾರಿಗಳಿಗೆ ತಿಳಿದಿದ್ದರೂ, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಕಸದ ಸಮಸ್ಯೆಗೆ ಮತ್ತು ಇತರ ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಅಥವಾ ಪ್ರವಾಸಿ ಮಾರ್ಗದರ್ಶಿಯನ್ನು ನೇಮಿಸುವಂತೆ ಸ್ಥಳೀಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.